Press not for publication

deaddiction News

                                                                      || ಓಂ ಶ್ರೀ ಮಂಜುನಾಥಾಯ ನಮಃ ||

                                                                      CT® ಕರ್ನಾಟಕ ಜನಜಾಗೃತಿ ವೇದಿಕೆ

                                                                                  ಪ್ರಕಟನೆಯ ಕೃಪೆಗಾಗಿ                                                                                                                                                                                                                                                                           

                                                                                                                                                                                   ದಿನಾಂಕ: 11.11.2019

                               ಬದುಕಿನ ಸಾರ್ಥಕತೆಗೆ ಮನಸ್ಸಿನ ಪರಿವರ್ತನೆ ಬಹಳ ಮುಖ್ಯಡಾ| ಡಿ. ವೀರೇಂದ್ರ ಹೆಗ್ಗಡೆಯವರು

ಉಜಿರೆ. ನ.11 : “ಪ್ರತಿಯೊಂದು ರಂಗದಲ್ಲಿಯೂ ಸಮಾನ ಆಸಕ್ತರು ಮತ್ತು ಸಮಾನ ಮನಸ್ಕರಿರುತ್ತಾರೆ. ಸಾಂಸ್ಕøತಿಕ, ಕೃಷಿ, ಸಾಹಿತ್ಯ ಕ್ಷೇತ್ರದ ಸಮಾನ ಮನಸ್ಕರು ಆಯಾ ರಂಗಗಳಲ್ಲಿ ವಿಶೇಷ ಸಾಧನೆ ಮಾಡುವ ಉದ್ದೇಶದೊಂದಿಗೆ ಒಟ್ಟು ಸೇರಿ ಆಲೋಚಿಸುತ್ತಾರೆ. ಆದರೆ ದುಶ್ಚಟಕ್ಕೆ ಒಳಗಾದ ಸಮಾನ ಮನಸ್ಕರು ತನ್ನತನವನ್ನೇ ಮರೆತು ಆರೋಗ್ಯ, ಸಾಮಾಜಿಕ ಗೌರವ, ದೀರ್ಘಾಯುಷ್ಯ, ಆರ್ಥಿಕ ಪರಿಸ್ಥಿತಿ ಮತ್ತು ಬದುಕಿನ ಭದ್ರತೆಯನ್ನೇ ಕಳಕೊಳ್ಳುವ ಪರಿಸ್ಥಿತಿಗೆ ತುತ್ತಾಗುತ್ತಾರೆ. ಪರಾಕಾಯ ಪ್ರವೇಶವಾದಂತೆ ತನ್ನ ಶರೀರದ ಮೇಲಿನ ಹಿಡಿತವನ್ನು ಸಂಪೂರ್ಣವಾಗಿ ವ್ಯಸನಕ್ಕೊಪ್ಪಿಸಿ ದಾಸನನ್ನಾಗಿ ಮಾಡುತ್ತದೆ. ಮೋಸ, ಸುಳ್ಳು, ದೋಷ, ತಪ್ಪುಗಳ ಸುಳಿಯಲ್ಲಿ ಸಿಲುಕಿ ನಾನಾ ತರಹದ ಕಠಿಣ ಪರೀಕ್ಷೆಗೆ ತುತ್ತಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮದ್ಯವರ್ಜನ ಶಿಬಿರಗಳು ವಾಸ್ತವಸ್ಥಿತಿಯ ಬದುಕನ್ನು ಪರಿಚಯಿಸುವುದರ ಜೊತೆಗೆ ವ್ಯಸನದಿಂದಾದ ದೋಷಗಳಿಗೆ ಪರಿಹಾರವನ್ನು ನೀಡುತ್ತದೆ. ತನ್ನ ದೋಷವನ್ನು ತಾನೇ ಹೇಳಿಕೊಳ್ಳುವುದು, ತನ್ನ ತಪ್ಪನ್ನು ತಾವೇ ಒಪ್ಪಿಕೊಳ್ಳುವುದು, ತಮ್ಮ ಹಳೆಯ ಜೀವನದ ಬಗ್ಗೆ ಅಸಹ್ಯ ಪಡುವುದೇ ಪರಿವರ್ತನೆಯಾಗಿದೆ. ವಿಶ್ವಾಮಿತ್ರನ ತಪಸ್ಸನ್ನು ಮೇನಕೆ ಭಂಗಪಡಿಸುವ ಪ್ರಯತ್ನದಲ್ಲಿ ಸಫÀಲವಾಗುವುದಿಲ್ಲ. ಹಾಗೆಯೇ ನಮ್ಮ ಚಂಚಲ ಮನಸ್ಸುಗಳನ್ನು ಹತೋಟಿಯಲ್ಲಿಟ್ಟು ಕುಡಿತ ಬಿಡುವುದೇ ಹೆಮ್ಮೆಯೆಂದು ಭಾವಿಸಿ ಜೀವನ ಸಾರ್ಥಕಗೊಳಿಸುವುದೇ ಮದ್ಯವರ್ಜನ ಶಿಬಿರಗಳ ಉದ್ದೇಶವಾಗಿದೆ” ಎಂದು  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ  ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು 146ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬ ದಿನದಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ  ಆಗಮಿಸಿರುವ 79 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.   

ಈ ಸಂದರ್ಭದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿಗಳಾದ  ಡಾ| ಎಲ್.ಹೆಚ್. ಮಂಜುನಾಥ್‍ರವರು ಉಪಸ್ಥಿತರಿದ್ದರು. ಮುಖ್ಯವಾಗಿ ಈ 8 ದಿನದ ಶಿಬಿರದಲ್ಲಿ ವಿಷಯಾಧಾರಿತ ಮಾಹಿತಿ, ಗುಂಪು ಸಲಹೆ, ವೈಯಕ್ತಿಕ ಸಲಹೆ, ಮನೋ ವೈದ್ಯಕೀಯ ಚಿಕಿತ್ಸೆ, ಆಧ್ಯಾತ್ಮಿಕ ಚಿಂತನೆ, ಯೋಗ, ಇನ್ನಿತರ ಚಟುವಟಿಕೆಗಳೊಂದಿಗೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಶ್ರೀ ಪಿ. ಚೆನ್ನಪ್ಪ ಗೌಡ, ಶಿಬಿರಾಧಿಕಾರಿಯಾಗಿ ಶ್ರೀ ನಾಗರಾಜ್ ಕುಲಾಲ್, ಆರೋಗ್ಯ ಸಹಾಯಕರಾಗಿ ಶ್ರೀ ವೆಂಕಟೇಶ್ ಸಹಕರಿಸಿರುತ್ತಾರೆ. 

      ಈ ಸಂದರ್ಭದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿಗಳಾದ  ಡಾ| ಎಲ್.ಹೆಚ್. ಮಂಜುನಾಥ್‍ರವರು ಉಪಸ್ಥಿತರಿದ್ದರು. ಮುಖ್ಯವಾಗಿ ಈ 8 ದಿನದ ಶಿಬಿರದಲ್ಲಿ ವಿಷಯಾಧಾರಿತ ಮಾಹಿತಿ, ಗುಂಪು ಸಲಹೆ, ವೈಯಕ್ತಿಕ ಸಲಹೆ, ಮನೋ ವೈದ್ಯಕೀಯ ಚಿಕಿತ್ಸೆ, ಆಧ್ಯಾತ್ಮಿಕ ಚಿಂತನೆ, ಯೋಗ, ಇನ್ನಿತರ ಚಟುವಟಿಕೆಗಳೊಂದಿಗೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಶ್ರೀ ಪಿ. ಚೆನ್ನಪ್ಪ ಗೌಡ, ಶಿಬಿರಾಧಿಕಾರಿಯಾಗಿ ಶ್ರೀ ನಾಗರಾಜ್ ಕುಲಾಲ್, ಆರೋಗ್ಯ ಸಹಾಯಕರಾಗಿ ಶ್ರೀ ವೆಂಕಟೇಶ್ ಸಹಕರಿಸಿರುತ್ತಾರೆ.

      ಶಿಬಿರದಲ್ಲಿ ಬೆಂಗಳೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಮೈಸೂರು, ಹಾಸನ, ಹಾವೇರಿ, ಹುಬ್ಬಳ್ಳಿ, ಕೋಲಾರ, ಬೆಳಗಾಂ, ಗೋವಾ, ಗುಲ್ಬರ್ಗ, ಬಿಜಾಪುರ, ಕೊಡಗು, ಕಾಸರಗೋಡು, ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಶಿಬಿರಾರ್ಥಿಗಳು ಆಗಮಿಸಿದ್ದರು. ವಿಶೇಷತೆಯೇನೆಂದರೆ, ಶಿಬಿರದಲ್ಲಿ ಇಂಜಿನಿಯರ್  3 ಮಂದಿ, ಸರಕಾರಿ ಉದ್ಯೋಗಿಗಳು 16, ಖಾಸಗಿ ಉದ್ಯೋಗಿಗಳು 12, ವಕೀಲರು 1, ಸೀನೀಯರ್ ಅಕೌಂಟೆಂಟ್ 1, ವಿದ್ಯಾರ್ಥಿಗಳು 2, ನಿವೃತ್ತ ಸಹಾಯಕ ಕೃಷಿ ಅಧಿಕಾರಿ 1, ಹಾಗೂ ಜಮೀನ್ದಾರರೂ ಭಾಗವಹಿಸಿದ್ದರು. ಮುಂದಿನ ವಿಶೇಷ ಶಿಬಿರವು ದಿನಾಂಕ:18.11.2019 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

                                                                                                                                                                        ಶ್ರೀ ವಿವೇಕ್ ವಿ. ಪಾೈಸ್

                                                                                                                                                                      ನಿರ್ದೇಶಕರು/ಕಾರ್ಯದರ್ಶಿ