ಭದ್ರಾವತಿ ತಾಲೂಕಿನಲ್ಲಿ 1861 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಭದ್ರಾವತಿ ತಾಲೂಕಿನಲ್ಲಿ 1861 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಶ್ರೀ ಕಾಂತರಾಜ್ ಸಮಿತಿ ಅಧ್ಯಕ್ಷರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀಯುತ ಪಾಲಾಕ್ಷ ಉಪಾಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗ, ಶ್ರೀಮತಿ ಲತಾ ಚಂದ್ರಶೇಖರ್ ಸದಸ್ಯರು ನಗರಸಭಾ ಭದ್ರಾವತಿ, ಶ್ರೀಯುತ ಆನಂದ್ ಅಧ್ಯಕ್ಷರು ಗ್ರಾಮ ಪಂಚಾಯತ್ ಕಲ್ಲಹಳ್ಳಿ ಭದ್ರಾವತಿ, ಶ್ರೀಮತಿ ಪಾರ್ವತಮ್ಮ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಭದ್ರಾವತಿ, ಶ್ರೀಯುತ ಪ್ರಕಾಶ್ ನಾಯಕ್ ವೈ. ಯೋಜನಾಧಿಕಾರಿಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭದ್ರಾವತಿ, ಶ್ರೀಯುತ ನಾಗರಾಜ್ ಕುಲಾಲ್ ಯೋಜನಾಧಿಕಾರಿಗಳು ಜನಜಾಗೃತಿ ಚಿತ್ರದುರ್ಗ ಪ್ರಾದೇಶಿಕ ವಿಭಾಗ, ವಲಯದ ಮೇಲ್ವಿಚಾರಕರು ಶ್ರೀ ಪ್ರದೀಪ್, ನವಜೀವನ ಸಮಿತಿಯ ಸದಸ್ಯರು, ಗಣ್ಯಾಧಿ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.