ಕೊಪ್ಪಳ ಪಶ್ಚಿಮ ತಾಲೂಕಿನಲ್ಲಿ ನಡೆದ 1807ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ಕೊಪ್ಪಳ ಜಿಲ್ಲಾ ಕಛೇರಿ ವ್ಯಾಪ್ತಿಯ ಕೊಪ್ಪಳ ಪಶ್ಚಿಮ ತಾಲೂಕಿನಲ್ಲಿ ನಡೆದ 1807 ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಶ್ರೀ ಮಳೆ ಮಲ್ಲೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸ್ವಾಮಿ ಶ್ರೀ ಶಿವರಾಮ ಕೃಷ್ಣನಂದ ಭಾರತಿ ಮಹಾಸ್ವಾಮಿಗಳು, ಶ್ರೀ ಶಂಕರಾಚಾರ್ಯ ಮಠ ಭಾಗ್ಯನಗರ ಇವರು ದಿವ್ಯ ಸಾನಿಧ್ಯ ವಹಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ರಾಘವೇಂದ್ರ ಹಿಟ್ನಾಳ್ ಮಾನ್ಯ ಶಾಸಕರು ಕೊಪ್ಪಳ ವಿಧಾನಸಭಾ ಕ್ಷೇತ್ರ, ಶ್ರೀ. ಡಾ. ಬಸವರಾಜ್ ಕೆ. ಶರಣಪ್ಪ ಕೆ.ಎಸ್ ಹಾಸ್ಪಿಟಲ್, ಶ್ರೀ ಜನಾರ್ಧನ ಹುಲುಗಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಕೊಪ್ಪಳ, ಜಿಲ್ಲಾ ನಿರ್ದೇಶಕರು ಶ್ರೀ ಪ್ರಕಾಶ್ ರಾವ್ ಉಪಸ್ಥಿತರಿದ್ದರು.