ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಜಾಗೃತಿ ಸೌಧದಲ್ಲಿ ನಡೆಯುತ್ತಿರುವ 241 ನೇ ವಿಶೇಷ ಮದ್ಯವರ್ಜನ ಶಿಬಿರದ ಆರನೇ ದಿವಸದ ಕಾರ್ಯಕ್ರಮಕ್ಕೆ ಪೂಜ್ಯರು ಆಗಮಿಸಿ 60 ಮಂದಿ ಶಿಬಿರಾರ್ಥಿಗಳಿಗೆ ವಿಶೇಷವಾಗಿ ಆಶೀರ್ವಚನ ನೀಡುತ್ತಾ ಪ್ರಾರ್ಥನೆ ಮತ್ತು ಧ್ಯಾನ ಮನ ಪರಿವರ್ತನೆಗೆ ಸಹಕಾರಿಯಾಗಲಿದೆ, ಕುಡಿತ ಬಿಟ್ಟು ನವಜೀವನ ನಡೆಸುವ ಸಂದರ್ಭ ಕುಟುಂಬ ಮತ್ತು ಸಮಾಜವನ್ನು ಪ್ರೀತಿಯಿಂದ ನೋಡುವ ಅವಕಾಶ ನಮಗೆ ದೊರಕುತ್ತದೆ ಎಂದು ವಿಶೇಷ ಸಂದೇಶ ನೀಡುವುದರ ಮೂಲಕ ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯಸ್, ಶ್ರೀಯುತ ಮಹಾವೀರ ಅಜ್ರಿ, ಧನ ಕೀರ್ತಿ, ಜನಜಾಗೃತಿ ಪ್ರಾದೇಶಿಕ ವಿಭಾಗದ ಆಡಳಿತಾತ್ಮಕ ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ, ಜಾಗೃತಿ ಸೌಧದ ಪ್ರಬಂಧಕರಾದ ಶ್ರೀ ಕಿಶೋರ್ ಕುಮಾರ್, ಶಿಬಿರದ ಆಪ್ತ ಸಲಹೆಗಾರರಾದ ಶ್ರೀ ಮಧು ಜಿ. ಆರ್.,
ಶಿಬಿರಾಧಿಕಾರಿಗಳು,ಆರೋಗ್ಯ ಸಹಾಯಕರು ಮತ್ತು ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
