ಧಾರವಾಡ ಪ್ರಾದೇಶಿಕ ವಿಭಾಗದ ಅಥಣಿ/ ಚಿಕ್ಕೋಡಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

Janajagurthi Vedike News

ಅಥಣಿ/ಚಿಕ್ಕೋಡಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಎಸ್. ಟಿ. ಮುನ್ನೊಳ್ಳಿ ಯವರು ಉದ್ಘಾಟಿಸಿದರು. ಸಭೆಯನ್ನು ಸಾಮೂಹಿಕ ದೇವಗೀತೆ, ಧ್ಯೇಯಗೀತೆ ಮೂಲಕ ಪ್ರಾರಂಭವಾಗಿ, ಗತಸಭೆಯ ವರದಿಯನ್ನು ಜಿಲ್ಲಾ ವೇದಿಕೆಯ ಕಾರ್ಯದರ್ಶಿಗಳಾದ ನಾಗರತ್ನಾ ಹೆಗಡೆ ಯವರು ಮಂಡಿಸಿದರು. ಸಭೆಯಲ್ಲಿ ಜನಜಾಗೃತಿ ಕಾರ್ಯಕ್ರಮಗಳ 2024-25 ಸಾಲಿನ ಕ್ರಿಯಾ ಯೋಜನೆಯನ್ನು ವೇದಿಕೆಯ ಕಾರ್ಯದರ್ಶಿಗಳಾದ ಶ್ರೀಯುತ ವಿಠ್ಠಲ್ ಸಾಲಿಯನ್, ಶ್ರೀಮತಿ ನಾಗರತ್ನ ಹೆಗಡೆಯವರು ಪ್ರಸ್ತುತಪಡಿಸಿದರು. ಸ್ಥಾಪಕ ಅಧ್ಯಕ್ಷರ ಉಪಸ್ಥಿತಿಯಲ್ಲಿ ಶಿಬಿರಗಳು, ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ, ಮಾದಕ ವಿರೋಧಿ ಕಾರ್ಯಕ್ರಮ, ತಂಬಾಕು ವಿರೋಧಿ ಕಾರ್ಯಕ್ರಮ, ಕಿರು ಚಿತ್ರಗಳ ಪ್ರದರ್ಶನ, ನವ ಜೀವನೋತ್ಸವ ಕಾರ್ಯಕ್ರಮಗಳು, ವಲಯಕ್ಕೊಂದು ಸಮಿತಿ ರಚನೆ, ನವಜೀವನ ಸದಸ್ಯರ ಮನೆ ಭೇಟಿ, ನವಜೀವನ ಸದಸ್ಯರ ಫ್ರೀ ಕಾನ್ಫರೆನ್ಸ್ ಸಭೆ, ಶೌರ್ಯ ವಿಪತ್ತು ಕಾರ್ಯಕ್ರಮಗಳ ಸಾಧನೆ ಮತ್ತು ಅನುಷ್ಠಾನ, ಘಟಕಗಳ ಮಾಸಿಕ ಸಭೆ, ತಾಲೂಕು ಸಮಿತಿಗಳ ಸಭೆ, ಸಂಯೋಜಕರ ಮತ್ತು ಘಟಕ ಪ್ರತಿನಿಧಿಗಳ ಸಭೆ ಕುರಿತಂತೆ ಚರ್ಚಿಸಲಾಯಿತು.