ಧಾರವಾಡ ಪ್ರಾದೇಶಿಕ ವಿಭಾಗದ ಬೆಳಗಾಂ 2 ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ ಮತ್ತು ಕರಪತ್ರ ಬಿಡುಗಡೆ

Janajagurthi Vedike News

ಯರಗಟ್ಟಿ ಯೋಜನಾ ಕಚೇರಿಯಲ್ಲಿ ಬೆಳಗಾಂ 2 ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯು ಈರಣ್ಣ ಗೌಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ 2023 24ನೇ ಸಾಲಿನ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆದು ಅನುಮೋದಿಸಲಾಯಿತು. 2024-25 ಸಾಲಿನ ಕ್ರಿಯಾ ಯೋಜನೆಯ ಅನುಷ್ಠಾನದ ಬಗ್ಗೆ ಮತ್ತು ನವಜೀವನ ಸಮಿತಿಗಳ ಬಲವರ್ಧನೆ, ಶೌರ್ಯ ಕಾರ್ಯಕ್ರಮ, ಮದ್ಯವರ್ಜನಾ ಶಿಬಿರ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಯಿತು. ಮಧ್ಯಮುಕ್ತ ಮತ್ತು ಆಮಿಷ ಮುಕ್ತ ಚುನಾವಣೆಗೆ ಪೂರಕವಾಗಿ ಕರಪತ್ರವನ್ನು ವಿತರಿಸಿ ಜನಜಾಗೃತಿ ಕಾರ್ಯಕ್ರಮದ ಬಗ್ಗೆ ಪತ್ರಿಕಾ ಪ್ರತಿನಿಧಿಗಳಿಗೆ ವಿವರ ನೀಡಲಾಯಿತು. ಈ ಸಂದರ್ಭ ಸ್ಥಾಪಕ ಅಧ್ಯಕ್ಷರಾದ ಸೋಮಶೇಖರ ಮುಗದಮ್, ಅಶೋಕ್ ಕುಲಗೋಡು, ಜಿಲ್ಲಾ ಕಾರ್ಯದರ್ಶಿಗಳಾದ ಲವಕುಮಾರ್, ಪ್ರಾದೇಶಿಕ ಯೋಜನಾಅಧಿಕಾರಿ ಭಾಸ್ಕರ್ , ಜಿಲ್ಲಾ ವ್ಯಾಪ್ತಿಯ ಯೋಜನಾಧಿಕಾರಿಗಳು, ಜನಜಾಗೃತಿ ವೇದಿಕೆಯ ಗೌರವಾನ್ವಿತ ಸದಸ್ಯರು, ಜನಜಾಗೃತಿ ಮೇಲ್ವಿಚಾರಕರು ಉಪಸ್ಥಿತರಿದ್ದರು.