ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾII ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾII ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ, 1954ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕುಶಾಲನಗರ ವಲಯ ಇವರ ಆಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸೋಮವಾರಪೇಟೆ / ಕುಶಾಲನಗರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕೊಡಗು ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ ಇದರ …
ಬೆಳಗಾವಿ 1951 ನೇ ಮದ್ಯ ವರ್ಜನ ಶಿಬಿರದ ಉದ್ಘಾಟನೆ.
ಬೆಳಗಾವಿ -1 ಯೋಜನಾ ವ್ಯಾಪ್ತಿಯ 1951 ನೇ ಮದ್ಯವರ್ಜನ ಶಿಬಿರದ ಉದ್ಘಾಟನೆಯನ್ನು ಕೆಪಿಸಿಸಿ ಸದಸ್ಯರಾದ ಶ್ರೀ ಮಲ್ಲಗೌಡ ಕಲ್ಲುಗೌಡ ಪಾಟೀಲ ರವರು ಉದ್ಘಾಟಿಸಿದರು.ಸರಕಾರ ಮಾಡದ ಸಮಾಜಮುಖಿ ಕಾರ್ಯಗಳನ್ನು ಪೂಜ್ಯರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸಿಕೊಂಡು ಹೋಗುತ್ತಿದೆ, ಪೂಜ್ಯರು ಸಮಾಜಮುಖಿ ಚಿಂತನೆಗಳು ಮುಂದಿನ ಪೀಳಿಗೆಗೆ ಮಾದರಿ ಎಂದರು.ಬೆಳಗಾವಿ -1 ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ್ ರವರು ಯೋಜನೆಯ ಮೂಲಕ ನಡೆಸಿಕೊಂಡು ಹೋಗುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾದ ಶ್ರೀ ಬಸವರಾಜ ಸೊಪ್ಪಿನ ಮಠ ಮಾತನಾಡಿ …
ಭಾವನಾತ್ಮಕ ಸಂಬಂಧವನ್ನು ಬೆಸೆಯುವ ಭಾವಗಳ ಗೊಂಚಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ.
ಇದೊಂದು ಭಾವನೆಗಳ ಪ್ರಪಂಚದಲ್ಲಿ ಉತ್ಕೃಷ್ಟ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಲು ಬಯಸುವ ನೈಜ ಕಾರ್ಯಕ್ರಮ. ಮಾತಿಗಿಂತ ಮೌನ ಸುಮ್ಮನೆ ತಬ್ಬಿಕೊಂಡು ಒಂದೆಡೆಗೆ ಕುಳ್ಳರಿಸಿದೆ. ಬದುಕು ಎಂದರೆ ಭಾವಗಳ ಸಂಗಮ.ಅಂತ ಮಹಾನ ಸoಗಮವಾಗಿದ್ದು ಮಾತ್ರ ಸದಾ ಸ್ಮರಣೀಯ…ಇನ್ನೂ ಕಾರ್ಯಕ್ರಮದ ತೆರೆಯ ಹಿಂದೆ ಕಷ್ಟ ಪಟ್ಟ ಅದೆಷ್ಟೋ ಕಾಣದ ಕೈಗಳು ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಮಂಜುನಾಥನ ಕೃಪೆಗೆ ಪಾತ್ರರಾಗಿದ್ದಾರೆ.ಬೇಡಿಕೆಗಿಂತ ಬೇಧವಿಲ್ಲದೆ ಎಲ್ಲರೂ ಒಂದಾಗಿ ಮಾನವ ಕುಲವನ್ನು ಬೆಳಗುವ ಸದುದ್ದೇಶದಿಂದ ಹಗಲಿರುಳು ಇಷ್ಟಪಟ್ಟು ಪ್ರೀತಿಯಿಂದ ದುಡಿದ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಹನ್ನೆರಡು ವರ್ಷಗಳ ಅವಿನಾಭಾವ ನಂಟು ಹೊಂದಿರುವ ನನಗೆ ಈ …
ವ್ಯಸನ ಮುಕ್ತ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಅಮೂಲ್ಯ.
ಉಡುಪಿ ಜಿಲ್ಲಾ ಪೊಲೀಸ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಸೌಖ್ಯವನ ಇವರ ಸಹಭಾಗಿತ್ವದಲ್ಲಿ ಇಂದು ಉಡುಪಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ವ್ಯಸನ ಮುಕ್ತ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಎನ್ನುವ ವಿಷಯವಾಗಿ ಉಡುಪಿಯ ಸೌಖ್ಯ ವನದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರು ಮಾತನಾಡಿ ಜೀವನದ ಪ್ರಥಮ ಪಾಠ ಆತ್ಮರಕ್ಷಣೆ, ಎರಡನೇಯದು ಜೀವ ರಕ್ಷಣೆ, ಪ್ರಾಣಿಪಕ್ಷಿಗಳು ಪ್ರಕೃತಿ ದತ್ತವಾಗಿ ಬದುಕುತ್ತವೆ, ಮನುಷ್ಯರು ವಿಕೃತಿ ದತ್ತವಾಗಿ ಬದುಕುವುದು …
1947 ನೇ ಸವದತ್ತಿ ಶಿಬಿರದ ಸಮಾರೋಪ ಸಮಾರಂಭ
ಸವದತ್ತಿಯಲ್ಲಿ ಇಂದು ನಡೆದ 1947 ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವನ್ನು ಶ್ರೀ ಮ. ನಿ. ಪ್ರ. ಸ್ವ. ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ವೀರಕ್ತಮಠ ಇನಾಮಹೊಂಗಲ, ಸವದತ್ತಿ ವಹಿಸಿಕೊಂಡಿದ್ದರು.ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಲ್ಲಿಕಾರ್ಜುನ ಹೆಗ್ಗನ್ನವರ, ಮಾನ್ಯ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಸವದತ್ತಿ , ಶ್ರೀ ರಾಜಶೇಖರ್ ಕಾರದಗಿ ಮಾಜಿ ಅಧ್ಯಕ್ಷರು ಸೌದತ್ತಿ ಎಲ್ಲಮ್ಮ ಪುರಸಭೆ, ಶ್ರೀ ಮಲ್ಲಿಕಾರ್ಜುನ್ ಬೇವೂರು ಮುಖ್ಯ ಕಾರ್ಯನಿರ್ವಾಹಕರು ಸವದತ್ತಿ ಅರ್ಬನ್ ಕೊ ಆಫ್ ಸೊಸೈಟಿ ಸವದತ್ತಿ,ಹಿರಿಯ ವೈದ್ಯರಾದ ಸಿಬಿ ನಾವದಗಿ, ಶ್ರೀ …









