ಉಡುಪಿ ಪ್ರಾದೇಶಿಕ ವಿಭಾಗದ,ಉಡುಪಿ ಜಿಲ್ಲೆಯ,ಕಾರ್ಕಳ ತಾಲೂಕಿನ, ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯುತ್ತಿರುವ ಗಾಂಧೀ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮದಲ್ಲಿ ಶ್ರೀ ಅನಿಲ್ ಕುಮಾರ್ ಎಸ್ ಎಸ್ ಮುಖ್ಯ ನಿರ್ವಹಣಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿಜಿಸ್ಟರ್ ಬಿ.ಸಿ ಟ್ರಸ್ಟ್ ಧರ್ಮಸ್ಥಳ ಗೌರವಾನ್ವಿತರು ಕಾರ್ಯಕ್ರಮ ಉದ್ದೇಶಿಸಿ ಮಾತಾಡಿದರು, ಈ ಕಾರ್ಯಕ್ರಮದಲ್ಲಿ ಉದಯಕುಮಾರ್ ಹೆಗ್ಡೆ ತಾಲೂಕು ಜನಜಾಗೃತಿ ವೇದಿಕೆ ಕಾರ್ಕಳ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು, ಶ್ರೀ ಅಭಯ್ ಚಂದ್ರ ಜೈನ್ ಮಾಜಿ ಮಂತ್ರಿಗಳು ಕರ್ನಾಟಕ ಸರ್ಕಾರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ದೀಪನ ಮಾಡಿದರು,ಶ್ರೀಮತಿ ರೂಪ ಟಿ ಶೆಟ್ಟಿ ಮುಖ್ಯ ಅಧಿಕಾರಿ ಕಾರ್ಕಳ ಪುರಸಭೆ, ಶ್ರೀ ಸುಭಾಷ್ ಚಂದ್ರ ಚೌಟ ಮೂಡಬಿದ್ರಿ ಜನಜಾಗೃತಿ ಅಧ್ಯಕ್ಷರು, ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷರು ಜನಜಾಗೃತಿ ವೇದಿಕೆ ಹೆಬ್ರಿ,ಜನಜಾಗೃತಿ ಮಾಜಿ ಅಧ್ಯಕ್ಷರುಗಳು, ಮೂಡಬಿದ್ರೆ ಮತ್ತು ಕಾರ್ಕಳ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಹೇಮಲತಾ ಮತ್ತು ಸುನೀತ ನಾಯಕ್ ಉಪಸ್ಥಿತರಿದ್ದರು.
