ಬೆಳಗಾವಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

Janajagurthi Vedike News

ಬೆಳಗಾವಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ ಜಿಲ್ಲಾ ಜನ ಜಾಗೃತಿ ಸಭೆಯನ್ನು ಹಿರೇ ಬಾಗೇವಾಡಿ ತಾಲೂಕಿನ ಪಡಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಬಸವರಾಜ್ ಜಿ ಸೊಪ್ಪಿಮಠ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ಈ ಸಂದರ್ಭ ವಾರ್ಷಿಕ ಜನಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನ, ನವ ಜೀವನ ಸಮಿತಿಯ ಬಲವರ್ಧನೆ, ಜನಜಾಗೃತಿ ಸದಸ್ಯರುಗಳ ಜವಾಬ್ದಾರಿ, ಅನುಷ್ಠಾನ ಮತ್ತು ಪರಿಣಾಮ, ಜಯಂತಿಯ ಅಂಗವಾಗಿನ ಕಾರ್ಯಕ್ರಮಗಳ ಕುರಿತಂತೆ ವಿಸ್ತಾರವಾಗಿ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಯಿತು. ಹಾಗೂ ಜನಜಾಗೃತಿ ಸದಸ್ಯರುಗಳಿಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಯಿತು. ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ ಸಭೆಯನ್ನ ಉತ್ತಮ ರೀತಿಯಲ್ಲಿ ಸಂಘಟಿಸಿ ಸಂದರ್ಭದಲ್ಲಿ ಪೂರಕವಾಗಿ ಮಾಹಿತಿ ನೀಡಿದರು. ಪ್ರಾದೇಶಿಕ ಕಚೇರಿ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಭಾಸ್ಕರ್, ಜಿಲ್ಲೆ ಎಲ್ಲಾ ಕ್ಷೇತ್ರ ಯೋಜನಾಧಿಕಾರಿಗಳು, ಜನಜಾಗೃತಿ ವೇದಿಕೆ ಎಲ್ಲಾ ಪದಾಧಿಕಾರಿಗಳು, ಮತ್ತು ಸದಸ್ಯರು ಭಾಗವಹಿಸಿದ್ದರು.