ರಾಮನಗರ ತಾಲೂಕಿನ ಬಿಡದಿ ವಲಯದಲ್ಲಿ 1507 ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮದ ಉದ್ಘಾಟನೆ

Janajagurthi Vedike News

ರಾಮನಗರ ತಾಲೂಕಿನ ಬಿಡದಿ ವಲಯದ ಶ್ರೀ ಮಂಜುನಾಥ ಕನ್ವೆನ್ಷನ್ ಹಾಲ್ ನಲ್ಲಿ 1507 ನೇ ಮದ್ಯವರ್ಜನ ಶಿಬಿರವನ್ನು ಅವೇರಹಳ್ಳಿ ರೇವಣ್ಣ ಸಿದ್ದೇಶ್ವರ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿಗಳು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು ಈ ಸಂದರ್ಭ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎಚ್ ಮಂಜುನಾಥ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಚಿಕ್ಕಣ್ಣಯ್ಯ, ಸದಸ್ಯರಾದ ತಮ್ಮಣ್ಣ, ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀನಿವಾಸ್ , ಪುರಸಭಾ ಸದಸ್ಯರಾದ ಶ್ರೀಮತಿ ಮಂಜುಳಾ ,ಗೋವಿಂದಪ್ಪ ರೋಟರಿ ಸೆಂಟ್ರಲ್ ಬಿಡದಿ ಅಧ್ಯಕ್ಷರಾದ ಶ್ರೀ ವಸಂತಕುಮಾರ್, ಯೋಜನಾಧಿಕಾರಿಗಳಾದ ಸೂರ್ಯನಾರಾಯಣ, ಭಾಸ್ಕರ್ ,ಶಿಬಿರಾಧಿಕಾರಿ ದಿವಾಕರ ,ಆರೋಗ್ಯ ಸಹಾಯಕಿ ಕುಮಾರಿ ರಂಜಿತಾ , ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.ಈ ಸಂದರ್ಭ ಶಿಬಿರಾರ್ಥಿಗಳ ಚಿಕಿತ್ಸೆಗಾಗಿ ಬಿಡದಿಯ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಉಚಿತವಾಗಿ ಔಷಧಿಯ ವ್ಯವಸ್ಥೆಯನ್ನು ಮಾಡಿ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.