1474 ನೇ ಮದ್ಯವರ್ಜನ ಶಿಬಿರ ಹುಬ್ಬಳ್ಳಿ ತಾಲ್ಲೂಕಿನ S.A.K. ಸಮುದಾಯ ಭವನ ರಾಮಕೃಷ್ಣ ನಗರ ಹುಬ್ಬಳ್ಳಿ ಇಲ್ಲಿ ಪ್ರಕಾಶ್ ಕ್ಯಾರಕಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು .ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಉದ್ಘಾಟನೆಯನ್ನು ಸಂತೋಷ್ ಆರ್ ಶೆಟ್ಟಿ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರು ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ನೆರವೇರಿಸಿಕೊಟ್ಟರು .ಕಾರ್ಯಕ್ರಮದಲ್ಲಿ ಸುರೇಶ್ ಎಂ ನಿರ್ದೇಶಕರು ಎಸ್ .ಕೆ .ಡಿ .ಆರ್. ಡಿ .ಪಿ ಧಾರವಾಡ ,ಶ್ರೀಮತಿ ದ್ರಾಕ್ಷಾಯಿಣಿ ಅಳವಂಡಿ ಚೇರ್ ಪರ್ಸನ್ ವಿಘ್ನೇಶ್ವರ ವಿದ್ಯಾಸಂಸ್ಥೆ ಅರ್ಜುನ್ ವಿಹಾರ ಹುಬ್ಬಳ್ಳಿ, ಫಿರೋಜ್ ಖಂಡೇಕರ್ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರು , ಸಂಶುದ್ದೀನ್ ಹುಬ್ಬಳ್ಳಿ ಉದ್ದಿಮೆದಾರರು ಇಮ್ರಾನ್ ಯಲಿಗಾರ ಅಧ್ಯಕ್ಷರು ಹುಬ್ಬಳ್ಳಿ ಧಾರವಾಡ ಮಹಾನಗರ ಯುವ ಕಾಂಗ್ರೆಸ್ ,ರಾಘವೇಂದ್ರ ಪಿ ಮುರುಗೋಡು ಅಧ್ಯಕ್ಷರು ಸೋಮವಂಶ ಆರ್ಯಕ್ಷತ್ರಿಯ ಸಭಾಭವನ ,ಜೆ . ಎಂ ಕಾಲಿಮಿರ್ಚಿ ಸರ್ಕಲ್ ಇನ್ಸ್ ಪೆಕ್ಟರ್ ಗೋಕುಲ್ ರೋಡ್ ಪೊಲೀಸ್ ಠಾಣೆ ಹುಬ್ಬಳ್ಳಿ ಇವರು ಭಾಗವಹಿಸಿದ್ದರು . 34 ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ ಸೇರ್ಪಡೆ ಮಾಡಿಕೊಳ್ಳಲಾಯಿತು .
