ಪೂಜ್ಯ ಡಾ || ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ವತಿಯಿಂದ ಉಜಿರೆಯ ಶ್ರೀ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾದ 170 ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಭೇಟಿ ನೀಡಿ ಪಾನಮುಕ್ತ ಜೀವನಕ್ಕೆ ಮುಂದಡಿಯಿಟ್ಟ 90 ಮಂದಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವ್ಯಸನ ಮುಕ್ತಿಗೆ ಅಚಲ ನಿರ್ಧಾರ ಪಂಚೇಂದ್ರಿಯಗಳ ನಿಗ್ರಹ ದೇವರ ಪ್ರಾರ್ಥನೆ ಕೌಟುಂಬಿಕ ಸಂಬಂಧ ಸಾಮಾಜಿಕ ಪರಿವರ್ತನೆ ಆರ್ಥಿಕ ದೃಢತೆ ಮತ್ತು ನಿರಂತರತೆ ಮುಖ್ಯ.
