ಶ್ರೀ ಪಿ. ಮುರಳಿ ಮೋಹನ್ ರೆಡ್ಡಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಧೀಶರು ಬೆಳಗಾವಿ ಧಾರವಾಡ ಪ್ರಾದೇಶಿಕ ವಿಭಾಗದ ಬೆಳಗಾವಿ ಜಿಲ್ಲೆಯ ಖಾಸಬಾಗ್ ಯೋಜನಾ ವ್ಯಾಪ್ತಿಯ ಹಲಗಾದಲ್ಲಿ ನೆಡೆಯಿತಿರುವ 1619ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಕೇವಲ ಸಾಮಾಜಿಕ ಕಳಕಳಿಯ ಕಾರ್ಯಕ್ರಮದ ಜೊತೆಗೆ ಧೈವದತ್ತ ಕಾರ್ಯಕ್ರಮವಾಗಿದೆ.

Janajagurthi Vedike News

ಶ್ರೀ ಪಿ. ಮುರಳಿ ಮೋಹನ್ ರೆಡ್ಡಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಧೀಶರು ಬೆಳಗಾವಿ ಧಾರವಾಡ ಪ್ರಾದೇಶಿಕ ವಿಭಾಗದ ಬೆಳಗಾವಿ ಜಿಲ್ಲೆಯ ಖಾಸಬಾಗ್ ಯೋಜನಾ ವ್ಯಾಪ್ತಿಯ ಹಲಗಾದಲ್ಲಿ ನೆಡೆಯಿತಿರುವ 1619ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಕೇವಲ ಸಾಮಾಜಿಕ ಕಳಕಳಿಯ ಕಾರ್ಯಕ್ರಮದ ಜೊತೆಗೆ ಧೈವದತ್ತ ಕಾರ್ಯಕ್ರಮ ವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ಡಿ. ವೀರೇದ್ರ ಹೆಗ್ಗಡೆಯವರ ಈ ಕೈಕರ್ಯ ಶ್ಯಾಘನೀಯ ಸಂಗತಿ. ವ್ಯಸನ ಬಿಟ್ಟರೆ ಅಥವಾ ವ್ಯಸನ ಮಾಡದಿದ್ದರೆ ನೆಮ್ಮದಿಯ ಬದುಕು ನೆಡೆಸಬಹುದು. ಯಾವ ದೇಶದಲ್ಲಿ ವ್ಯಸನ ಕಡಿಮೆ ಇರುತ್ತದೆ ಹಾಗೂ ಯಾವ ಪ್ರದೇಶದಲ್ಲಿ ದುಶ್ಚಟ ಮಾಡುವರ ಸಂಖ್ಯೆ ಕಡಿಮೆ ಇರುತದೋ ಅ ದೇಶ ಅ ಪ್ರದೇಶ ಗೌರವದಿಂದ ಜೀವನ ನೆಡೆಸುತ್ತದೆ. ಇಂದಿನ ದಿನಗಳಲ್ಲಿ ಯುವ ಸಮೂಹ ಸಹ ದುಶ್ಚಟ ದುರಭ್ಯಾಸಕ್ಕೆ ಬಲಿಬೀಳುತ್ತಿರುದು ದುರಂತದ ಸಂಗತಿ. ಈ ನಿಟ್ಟಿನಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣದ ಈ ಕೆಲಸ ಅಭಿನಂದಾನರ್ಹ ಎಂದು ತಿಳಿಸಿದರು.