ಯಲಬುರ್ಗಾ ಗ್ರಾಮಾಂತರ ವಲಯದ ITI ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಿದ್ದು ಈ ಕಾರ್ಯಕ್ರಮವನ್ನು ಸಾಹಿತಿಗಳು ಮತ್ತು ಗಣ್ಯರು ಆದ ಶ್ರೀಯುತ ವೀರಣ್ಣ ಹುಬ್ಬಳ್ಳಿ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳು ತಮ್ಮ ಜೀವನ ಯಾವ ರೀತಿ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ ಮಾರುತಿ ಸರ್ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರೂಪಾಕ್ಷಪ್ಪ ಪ್ರಾಂಶುಪಾಲರು ವಹಿಸಿದ್ದರು, ವಲಯದ ಮೇಲ್ವಚಾರಕರು ಈಶ್ವರ ರಾಥೋಡ್, ಸೇವಾಪ್ರತಿನಿಧಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
