ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ವಲಯದ ಸೋಮೇಶ್ವರ ಸಮುದಾಯ ಭವನದಲ್ಲಿ ವಿಶ್ವ ದಾಖಲೆಯ 1500 ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ನೆರವೇರಿತು, ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನ ಮಠ ಅರೆತಿಪ್ಪೂರುರವರು ಉದ್ಘಾಟಿಸಿ ಧರ್ಮಾಧಿಕಾರಿಗಳು ಸಮಾಜ ಉದ್ದಾರದ ದೃಷ್ಟಿಯಿಂದ ಮಾಡುತ್ತಿರುವ ಮದ್ಯವರ್ಜನ ಶಿಬಿರ ಶ್ಲಾಘನೀಯ ಕಾರ್ಯ ಎಂದು ನುಡಿದರು ವೇದಿಕೆಯಲ್ಲಿ ಜಿಲ್ಲಾ ನಿರ್ದೇಶಕರಾದ ವಿನಯ ಕುಮಾರ್ ಸುವರ್ಣ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಎಂ ಪಿ ಲಿಂಗೇಗೌಡರ ಗೌಡ ,ಗೌರವ ಅಧ್ಯಕ್ಷರಾದ ಸೋಮೇಗೌಡ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸಂದರ್ಶ ಪಿ , ಯೋಜನಾಧಿಕಾರಿಗಳ ಯೋಗೀಶ್, ಭಾಸ್ಕರ್, ಮೇಲ್ವಿಚಾರಕಿ ಶಿವಲೀಲಾ, ಶಿಬಿರಾಧಿಕಾರಿ ದಿವಾಕರ ಪೂಜಾರಿ, ಆರೋಗ್ಯ ಸಹಾಯಕಿ ಫಿಲೋಮಿನಾ, ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ,ನವಜೀವನ ಸದಸ್ಯರು ಉಪಸ್ಥಿತರಿದ್ದರು .
