ಬೆಂಗಳೂರು ಪ್ರಾದೇಶಿಕ ವಿಭಾಗದ ತುಮಕೂರು-1 ಜಿಲ್ಲೆಯ ತುಮಕೂರು ಯೋಜನಾಕಛೇರಿ ವ್ಯಾಪ್ತಿಯ ಹೊಳಕಲ್ಲು ಕಾರ್ಯಕ್ಷೇತ್ರದ ಶ್ರೀ ನಂಜುಂಡೇಶ್ವರ ಕಲ್ಯಾಣಮಂಟಪದಲ್ಲಿ ನಡೆಯುತ್ತಿರುವ 1970ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯವನ್ನು ಪಟ್ಟದ ಶ್ರೀ ಡಾ. ವಲಯ ಶಾಂತಮುನಿದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಶ್ರೀ ಮೇಲಣ ಗವಿಮಠ ವೀರಸಿಂಹಾಸನ ಸಂಸ್ಥಾನ ಮಠ ಶಿವಗಂಗಾ ಕ್ಷೇತ್ರ ಶ್ರೀಗಳು ವಹಿಸಿ ಒಂದು ಸರ್ಕಾರ ಮಾಡದಂತಹ ಸಹಸ್ರಾರು ಕಾರ್ಯಕ್ರಮಗಳನ್ನು ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳು ಇಂದು ಮಾಡುತ್ತಿದ್ದು ಪೂಜ್ಯ ವೀರೇಂದ್ರಹೆಗ್ಗಡೆಯವರನ್ನು ನಾವೆಲ್ಲರು ಧನ್ಯತಾಭಾವದಿಂದ ಗೌರವಿಸುವಂತಹ ಕೆಲಸವಾಗಬೇಕೆಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಮದ್ಯವರ್ಜನ ಶಿಬಿರವೆಂಬ ಪ್ರಸಾದ ನಿಮಗೆ ದೊರತಿದ್ದು ನಿಮ್ಮ ಪುಣ್ಯವೇಸರಿ ಎಂದು ತಿಳಿಸುವಮೂಲಕ ದಿವ್ಯಾಶೀರ್ವಚನವನ್ನು ನೀಡಿದರು

Janajagurthi Vedike Uncategorized