ಧಾರವಾಡ ಪ್ರಾದೇಶಿಕ ವಿಭಾಗದ ಅಥಣಿ ಜಿಲ್ಲಾ ಯೋಜನಾ ವ್ಯಾಪ್ತಿಯ ಮೂಡಲಗಿ ತಾಲೂಕಿನ ನಾಗನೂರಿನ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕಿನ ನವ ಜೀವನ ಸದಸ್ಯರ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು. ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನವಜೀವನ ಸದಸ್ಯರಿಗೆ ಆಟೋಟ ಕಾರ್ಯಕ್ರಮ ಆ ಯೋಜನೆ ಮಾಡಿದ್ದು ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಬರಮಣ್ಣ ಉಪ್ಪಾರ್, ಶ್ರೀ ಶಿವು ಗೋಟುರ್,ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯದ ಶ್ರೀ ರಾಜು , ಧಾರವಾಡ ಪ್ರಾದೇಶಿಕ ವಿಭಾಗದ ಜನಜಾಗ್ರತಿ ಯೋಜನಾಧಿಕಾರಿ ನಾಗೇಶ್ ವೈ ಎ, ಮೇಲ್ವಿಚಾರಕರಾದ ಉಮೇಶ್ ಹಡಪದ್, ಶ್ರೀಮತಿ ಲಕ್ಷ್ಮಿ , ಮತ್ತು ಊರಿನ ಗಣ್ಯರಾದ ಬಸವನಗೌಡ ಪಾಟೀಲ್ ಹಾಗೂ ಊರಿನ ಪ್ರಮುಖರು, ನವಜೀವನ ಸಮಿತಿಯ ಸದಸ್ಯರು ಕುಟುಂಬದವರು ಉಪಸ್ಥಿತರಿದ್ದರು
