ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವಾಸವಿ ಮಹಲ್ ಸಭಾಭವನದಲ್ಲಿ 2000 ನೆಯ ಮಧ್ಯವರ್ಜನ ಶಿಬಿರವು ದೊಡ್ಡಗುಣಿ ಶ್ರೀ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ್ ಇವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಲ್ಪಟ್ಟಿತು. ಅಧ್ಯಕ್ಷರಾಗಿ ಶ್ರೀ ಬಲರಾಮಯ್ಯ ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ, ಪಟ್ಟಣ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಶ್ವೇತಾ ಜಗದೀಶ್, ಪಟ್ಟಣ ಪಂಚಾಯತ್ ಕೌಂಚಲರಾದ ಮೋಹನ್ ಮತ್ತು ರೇಣುಕಾ ಪ್ರಸಾದ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಬಿಂದು ಮಾಧವ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಅಶೋಕ್ ಕುಮಾರ್, ವಾಸವಿ ಯೋಜನೆ ಸಂಘ ಗುಬ್ಬಿ ಇದರ ಅಧ್ಯಕ್ಷರಾದ ವೆಂಕಟೇಶ್, ರೈತ ಸಂಘದ ಮುಖಂಡರಾದ ಕೃಷ್ಣ ಗೆಟ್ಟಿ, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ಉಪಸ್ಥಿತರಿದ್ದು ಶುಭ ಹಾರೈಸಿ ರುತ್ತಾರೆ.
