ಚಿತ್ರದುರ್ಗ ತಾಲೂಕಿನಲ್ಲಿ 152ನೇ ಗಾಂಧಿ ಜಯಂತಿ ಅಂಗವಾಗಿ ನೀಲಕಂಠೇಶ್ವರ ಸಭಾ ಭವನದಲ್ಲಿ ಗಾಂಧಿ ಸ್ಮೃತಿ ಹಾಗೂ ವ್ಯಸನ ಮುಕ್ತ ಸಾಧಕರ ಸಮಾವೇಶ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಎಸ್ ಮಾರುತೇಶ್, ಉಪನ್ಯಾಸಕ ಡಾ. ಕರಿಯಪ್ಪ ಮಾಳಿಗೆ, ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷರಾದ ಜೆ.ಬಿ ತಿರ್ಥಪ್ಪ, ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಸಂಸ್ಕಾರ ಭಾರತಿ ಸಂಸ್ಥೆಯ ಕಾರ್ಯದರ್ಶಿ ಕೀರಣ್ ಶಂಕರ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ನಾಗರಾಜ್ ಸಂಗಮ್, ರೂಪ ಜನಾರ್ದನ್, ಕೆ.ಅರ್ ಮಂಜುನಾಥ್, ರಾಜು ನಾಯ್ಕ್, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗೇಶ್, ಚಿತ್ರದುರ್ಗ, ಸಿರಿಗೆರೆ ತಾಲೂಕಿನ ಯೋಜನಾಧಿಕಾರಿಗಳಾದ ಯಶೋಧ ಶೆಟ್ಟಿ ಹಾಗೂ ಪ್ರವೀಣ್ ಎ.ಜಿ ಉಪಸ್ಥಿತರಿದ್ದರು.
