ಶಿವಮೊಗ್ಗ ಜನಜಾಗೃತಿ ವೇದಿಕೆಯ 2ನೇ ತ್ರೈಮಾಸಿಕ ಸಭೆಯು ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಶ್ರೀ ಆನಂದ್ ರವರು ಮತ್ತು ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಬಿ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. 3 ತಿಂಗಳ ತ್ರೈಮಾಸಿಕ ಸಾಧನ ವರದಿಯನ್ನು ತಾಲೂಕುವಾರು ಮಂಡಿಸಿದರು. ಈ ವರ್ಷದ ಕ್ರಿಯಾ ಯೋಜನೆಯ ಪ್ರಕಾರ ನಡೆಯಬೇಕಾದ ಮದ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ, ನವಜೀವನೋತ್ಸವ, ಅಕ್ಟೋಬರ್ 2 ಗಾಂಧಿ ಜಯಂತಿ ಕಾರ್ಯಕ್ರಮ, ಅಧಿಕಾರಿ ವರ್ಗದವರ ವಿಶೇಷ ಸಭೆಯಲ್ಲಿ ಆದ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು. ಹೊಸ ಸದಸ್ಯರ ಸೇರ್ಪಡೆ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಕಾರ್ಯದರ್ಶಿಗಳು, ಸಭೆಯಲ್ಲಿ ಜಿಲ್ಲಾ ವೇದಿಕೆ ಸದಸ್ಯರು, ಯೋಜನಾಧಿಕಾರಿಗಳು, ಪ್ರಾದೇಶಿಕ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
