ಯಲಬುರ್ಗಾ ಶಿಬಿರದ ಕೊನೆಯ ದಿನವಾಗಿದ್ದು ಕುಟುಂಬ ದಿನ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಶ್ರೀ ಮಾಧವ ನಾಯಕ್ ಸರ್ ನಡೆಸಿಕೊಟ್ಟಿದ್ದು, ಬಳಿಕ ಸಮಾರೋಪ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ನಿರ್ದೇಶಕರಾದ ಪುರುಷೋತ್ತಮ್ ಪಿಕೆ ಸರ್, ಕೊಪ್ಪಳ ವೃತ್ತ ನಿರೀಕ್ಷಕರಾದ ನಾಗರೆಡ್ಡಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೊಳಜಿ, ಕೊಪ್ಪಳ ಜನಜಾಗತಿ ವೇದಿಕೆ ಸದಸ್ಯರಾದ ಸಂಗಣ್ಣ ತೆಂಗಿನಕಾಯಿ, ಶರಣಪ್ಪ ದಾನಕೈ, ಕೊಪ್ಪಳ ಜಿಲ್ಲೆ ನಿರ್ದೇಶಕರಾದ ಸದಾನಂದ ಬಂಗೇರ ಸರ್ ಉಪಸ್ಥಿತರಿದ್ದು ಶುಭ ಹಾರೈಸಿರುತ್ತಾರೆ. ಸಮರ್ಪ ಸಮಾರಂಭದಲ್ಲಿ ಹುಣಸೆಹಾಳ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿರುತ್ತಾರೆ.
