ಕೊಪ್ಪಳ ಪ್ರಾದೇಶಿಕ ವಿಭಾಗದ ಯಲಬುರ್ಗಾ ತಾಲೂಕಿನ ತಳಕಲ್ ಸಮುದಾಯ ಭವನದಲ್ಲಿ ನವಜೀವನೋತ್ಸಾಹ ಮತ್ತು ಮಂಜುನಾಥ ಸ್ವಾಮಿಯ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಗ್ರಾಮದ ಒಟ್ಟು 73ಮಂದಿ ನವಜೀವನ ಸದಸ್ಯರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ನವಜೀವನ ಸಮಿತಿಯ ಸದಸ್ಯರು ಬರಿಸಿರುತ್ತಾರೆ .ಕಾರ್ಯಕ್ರಮಕ್ಕೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರಾಕೇಶ್ ಪಿಡಿಒ ಶ್ರೀ ಆನಂದ್ ಎಲಿಗಾರ್.ನವಜೀವನ ಅಧ್ಯಕ್ಷ ಷಣ್ಮುಖಯ್ಯ .ಯೋಜನಾಧಿಕಾರಿ ಸತೀಶ್. ಮಾಧವ ನಾಯ್ಕ ಮೇಲ್ವಿಚಾರಕರು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು .ನವಜೀವನ ಸದಸ್ಯರ ಈ ಪರಿವರ್ತನೆಯಿಂದ ಯಲಬುರ್ಗ ತಾಲ್ಲೂಕಿನಲ್ಲಿ ವಿಶೇಷವಾದ ಜಾಗೃತಿ ಮತ್ತು ಸಹಕಾರ ಜನರಿಂದ ಲಭಿಸುತ್ತಿದೆ.
