ಧರ್ಮಸ್ಥಳದ ಮಿಯವಾಕಿ ಮಾದರಿ ನೆಡುತೋಪು ಅರಣ್ಯ ಇಲಾಖೆಯ ಕಾಡಿನಲ್ಲಿ ವನ್ಯಪ್ರಾಣಿಗಳಿಗಾಗಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಶ್ರೀ ಅರವಿಂದ ಲಿಂಬಾವಳಿ. ಕರ್ನಾಟಕ ಅರಣ್ಯ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಧರ್ಮಸ್ಥಳದ ಮಿಯವಾಕಿ ಮಾದರಿ ನೆಡುತೋಪು ಅರಣ್ಯ ಇಲಾಖೆಯ ಕಾಡಿನಲ್ಲಿ ವನ್ಯಪ್ರಾಣಿಗಳಿಗಾಗಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರದ ಮಾನ್ಯ ಅರಣ್ಯ ಸಚಿವ ಶ್ರೀ ಅರವಿಂದ ಲಿಂಬಾವಳಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಸಚಿವರು ಇಂದು ವಿಶ್ವ ಪರಿಸರ ದಿನ. ನೀವು ಗಿಡಗಳನ್ನ ನೆಟ್ಟು ಬೆಳೆಸುವ ಪ್ರಯತ್ನ ಮಾಡಿ. ಜಗತ್ತಿನಲ್ಲೇ ಇಂದು ಆಕ್ಸಿಜನ್ ಇಲ್ಲದೇ ಇರುವುದು ದೊಡ್ಡ ಪರಿಣಾಮವಾಗಿದೆ. ದೇಶ ವಿದೇಶದಿಂದ ಆಕ್ಸಿಜನ್ ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಮ್ಲಜನಕ ನೀಡುವ ಗಿಡಗಳನ್ನ ನೆಟ್ಟು ಬೆಳಸಬೇಕು ಎನ್ನುವ ವಿರೇಂದ್ರ ಹೆಗ್ಗಡೆಯವರ ಕರೆಯಂತೆ ಇಂದು ವಿಶ್ವಪರಿಸರ ದಿನದಂದು ಗಿಡಗಳನ್ನ ನೆಡುವ ಕಾರ್ಯ ನಡೆದಿದೆ.ಉಪಯುಕ್ತವಾದ ಗಿಡಗಳನ್ನ ಬೆಳೆಸುವ ಎಂದು ಕರೆನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಅರಣ್ಯವನ್ನ ಬೆಳೆಸಿ ಉಳಿಸಬೇಕಾಗಿದೆ. ಅರಣ್ಯವನ್ನ ರಕ್ಷಿಸಬೇಕಾಗಿದೆ. ಇಂದಿನ ವರ್ಷ ಮಾತ್ರ ಅಲ್ಲದೆ ನಿರಂತರವಾಗಿ ನಡೆಯುವ ಕಾರ್ಯಕ್ರಮ ಇದಾಗಿದೆ. ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಧರ್ಮಸ್ಥಳದ ವಿಪತ್ತು ಘಟಕದ ಸಕ್ರೀಯ ಕಾರ್ಯಕರ್ತರಿಗೆ ಗಿಡಗಳನ್ನ ವಿತರಿಸಲಾಯಿತು. ಈ ವೇಳೆ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜಾ, ವಿಧಾನ ಪರಿಷತ್ ಮಾನ್ಯ ಶಾಸಕ ಶ್ರೀ ಪ್ರತಾಪ್ ಸಿಂಹ ನಾಯಕ್, ಮತ್ತಿತರು ಉಪಸ್ಥಿತರಿದ್ದರು.
